ಗಂಗೊಳ್ಳಿ( ಅ,22): ವ್ಯಕ್ತಿತ್ವದ ಬೆಳವಣಿಗೆ, ನಾಯಕತ್ವ ಗುಣ ಕಲಿಕೆ, ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುವ ಗುಣ, ಪರಿಸರ ಸಂರಕ್ಷಣೆ ಮುಂತಾದ ಸೃಜನಾತ್ಮಕ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಬೆಳೆಸುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಹೊಂದಿದೆ ಎಂದು R I district 3182 ಜಿಲ್ಲಾ ಗವರ್ನರ್ ಎಂ ರಾಮಚಂದ್ರಮೂರ್ತಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ ರೋಟರ್ಯಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಾಕ್ಟ್ ಕ್ಲಬ್ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಯುವ ಬ್ರಿಗೇಡ್ ಕುಂದಾಪುರ: ಅ,23ರಂದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ಪಂಜಿನ ಮೆರವಣಿಗೆ
ಕುಂದಾಪುರ (ಅ,22): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಕ್ಟೋಬರ್ 23,ರ ಶನಿವಾರ ಸಂಜೆ 7:00 ಗಂಟೆಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ಚಾಲನೆ ಪಡೆದು ಕುಂದಾಪುರ ಬಸ್ ನಿಲ್ದಾಣ ಪುನಃ ಶಾಸ್ತ್ರಿ ಸರ್ಕಲ್ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುವ ಸಂಕಲ್ಪ:ಸಮಾಜ ಸೇವಕಿ ಶ್ರೀ ಮತಿ ಗೀತಾಂಜಲಿ ಸುವರ್ಣ
ಉಡುಪಿ(ಅ,21) : ಉಷಾ ಪೂಜಾರಿಯವರ ಹಳೆಯದಾದ ಮನೆ ಮಳೆ ಮತ್ತು ಗಾಳಿಗೆ ಮೈಯೊಡ್ಡಿ ಸಂಪೂರ್ಣ ಕುಸಿದಿದ್ದು ,ಇದರ ಮಾಹಿತಿ ಪಡೆದ ಸಮಾಜ ಸೇವಕರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಗಿರುವ ಶ್ರೀಮತಿ ಗೀತಾಂಜಲಿ ಸುವರ್ಣ ಉಷಾರವರ ಮನೆಗೆ ಭೇಟಿಕೊಟ್ಟು ಇವರ ಕಷ್ಟವನ್ನು ಆಲಿಸಿ ಈ ಬಡ ಕುಟುಂಬಕ್ಕೆ ಆಸರೆಯಾಗಲಿ ಎಂದು ಸ್ನೇಹ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಶ್ರೀ ಶಿವಾನಂದ್ ಕೋಟ್ಯಾನ್ ರವರ ಸಂಪೂರ್ಣ ಸಹಕಾರದೊಂದಿಗೆ ಶ್ರೀಮತಿ ಗೀತಾಂಜಲಿ ಸುವರ್ಣ […]
ಯುವಾ ಬ್ರಿಗೇಡ್ ಶಂಕರನಾರಾಯಣ: “ನನ್ನ ಶಾಲೆಗೆ ನನ್ನ ಸೇವೆ” ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ(ಅ,20): ಯುವ ಬ್ರೀಗೇಡ್ ಶಂಕರನಾರಾಯಣ ಇವರ ಆಯೋಜನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು “ನನ್ನ ಶಾಲೆಗೆ ನನ್ನ ಸೇವೆ” ಎನ್ನುವ ಶೀರ್ಷಿಕೆಯಡಿಯಲ್ಲಿ ಶಂಕರನಾರಾಯಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅಕ್ಟೋಬರ್,19 ಹಮ್ಮಿಕೊಳ್ಳಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ತನ್ನ ಶಾಲೆಯ ಆವರಣವನ್ನು ಚಂದಗಾಣಿಸುವಲ್ಲಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರಾದ ಸತೀಶ್ ಶಂಕರನಾರಾಯಣ, ಪ್ರಮೋದ್ ಶಂಕರನಾರಾಯಣ, ಕಿರಣ್ ಉಳ್ಳೂರು,ಚೇತನ್ ಶಂಕರನಾರಾಯಣ ಹಾಗೂ ಮುಖ್ಯ ಅತಿಥಿಗಳಾಗಿ […]
ಈಜುಗಾರ ,ಜೀವರಕ್ಷಕ, ಭಾಸ್ಕರ್ ತಲಗೋಡುರವರಿಗೆ ಮಾನವೀಯ ನೆಲೆಯ ಸಹಾಯ: ಉಡುಪಿಯ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆವತಿಯಿಂದ ಗ್ರಹ ನಿರ್ಮಾಣಕ್ಕೆ 1ಲಕ್ಷ ರೂ, ಧನಸಹಾಯ
ಕುಂದಾಪುರ(ಅ,15): ಈಜುಗಾರ ,ಜೀವರಕ್ಷಕ, ಭಾಸ್ಕರ್ ಕಳಸ,ತಲಗೋಡು ರವರ ಸಮಾಜ ಸೇವೆ ಗುರುತಿಸಿ ಕೊಟ್ಟ ಸನ್ಮಾನದ ಪ್ರಶಸ್ತಿಪತ್ರ ಹಲವಾರು . ಆದರೆ ಇವರಿಗೆ ವಾಸವಾಗಿರಲು ಮನೆ ಇಲ್ಲದಿರುವುದುಹಾಗೂ ಸರ್ಕಾರದ ಇಲಾಖೆಗಳ ನಿರ್ಲಕ್ಷ್ಯದ ಕುರಿತಾದ ಪೂರ್ಣ ಕಥೆ ಮತ್ತು ವ್ಯಥೆಯ ಪುಟವನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದ್ದೆವು. ಇದನ್ನು ಗಮನಿಸಿದ ಉಡುಪಿ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆ ಭಾಸ್ಕರ್ ತಲಗೋಡುರವರ ಮನೆ ಕಟ್ಟುವ ಆಸೆಗೆ ಸ್ಪಂದಿಸಿ 1ಲಕ್ಷ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. […]
ನಾನು ಮತ್ತು ನನ್ನ ಫಸ್ಟ್ ಬ್ಯಾಚ್ ಸ್ಟೂಡೆಂಟ್ಸ್
ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ತೆರೆದರೂ, ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಮಹತ್ವವನ್ನರಿತು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ವ್ರತ್ತಿಗೆ ಕಾಲಿಟ್ಟಾಗ ಕಾಲೇಜಿನ ಮೊದಲನೇ ದಿನದ ಅನುಭವ ಒಂಥರಾ ಚೆಂದ. ಮನಸ್ಸಲ್ಲಿ ಒಂಥರಾ ಖುಷಿ, ಒಂದಿಷ್ಟು ಭಯ, ಒಂದಿಷ್ಟು ಗೊಂದಲಗಳ ಗೂಡಾಗಿತ್ತು. ಪ್ರತಿಯೊಬ್ಬ ಶಿಕ್ಷಕರಿಗೂ ತಮ್ಮ ಮೊದಲ ಬ್ಯಾಚ್ ಸ್ಟೂಡೆಂಟ್ ಗಳ ನೆನಪು ಅಮರ. ಏಕೆಂದರೆ ಶಿಕ್ಷಕ ವೃತ್ತಿಯ […]
ಶೆಫ್ ಟಾಕ್ ಸಂಸ್ಥೆಯ ಗುಣಮಟ್ಟದ ಸೇವೆಗೆ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ – 2021 ಪ್ರಶಸ್ತಿ
ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ: 28 ನೇ ವರ್ಷದ ಶ್ರೀ ಶಾರದೋತ್ಸವ ಸಂಭ್ರಮ
ಬೈಂದೂರು (ಅ,10): ಬೈಂದೂರಿನ ಕಳವಾಡಿಶ್ರೀ ಈಶ್ವರ ಮಾರಿಕಾಂಬಾ ದೇವರ ಸನ್ನಿಧಿಯಲ್ಲಿ 28 ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮ ವಿಜ್ರಂಭಣೆಯಲ್ಲಿ ನಡೆಯಲಿದೆ. ಅಕ್ಟೋಬರ್ 12 ರ ಮಂಗಳವಾರ ಬೆಳಿಗ್ಗೆ 10 -00 ಗಂಟೆಗೆ ಶಾರದಾ ಪ್ರತಿಷ್ಠಾಪನೆ,12-00 ಗಂಟೆಗೆ ಮಧ್ಯಾಹ್ನ ಪೂಜೆ ,ಸಂಜೆ 6.30 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ರಾತ್ರಿ 8:00 ಗಂಟೆಗೆ ಶ್ರೀ ಈಶ್ವರ ಮಾರಿಕಾಂಬ ಪರಿವಾರ ದೇವರುಗಳಿಗೆ ನವರಾತ್ರಿ ಪೂಜೆ ಮತ್ತು ಶ್ರೀ ಶಾರದಾಂಬೆಗೆ ರಾತ್ರಿ […]
ಮೊಗವೀರ ಯುವ ಸಂಘಟನೆ ,ಬೈಂದೂರು- ಶಿರೂರು ಘಟಕ: ನಾಡೋಜ ಜಿ.ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೈಂದೂರು (ಅ,10): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಬೈಂದೂರು- ಶಿರೂರು ಘಟಕದ ವತಿಯಿಂದ ನಾಡೋಜ ಡಾ. ಜಿ ಶಂಕರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸಲಹೆಗಾರರಾದ ಶ್ರೀ ಎನ್. ಡಿ.ಚಂದನ್, ಶ್ರೀ ಜಗನ್ನಾಥ. ಎಮ್. ಉಪ್ಪುಂದ, ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ಶ್ರೀ ರವಿರಾಜ್ ಚಂದನ್ ಕಳವಾಡಿ, ಮಾಜಿ ಅಧ್ಯಕ್ಷರುಗಳಾದ […]
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










